ಶ್ರೀಕಾಂತ ಸ್ವಾಮಿ ಜೀಲ್ಲಾ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷರು ಬೀದರ ದವಸ ಧಾನ್ಯಗಳು ಕಡಿಮೆ ದರದಲ್ಲಿ ಮಾರಾಟ ಮಾಡಿ ಮನವಿ

ಬೀದರ ನ್ಯೂಸ್...

ಬೀದರ ಜಿಲ್ಲೆಯ ಕೆಲವು ವ್ಯಾಪಾರಿಗಳು ನಿರ್ದಯಿ ಆಗಿದ್ದಾರೆ, ಇಂತಹ ಕಷ್ಟದ ಸಮಯದಲ್ಲಿಯೂ ವ್ಯಾಪಾರಿಗಳು ದವಸಧಾನ್ಯ ಮೇಲೆ ಮನಬಂದಂತೆ ಹೆಚ್ಚಿನ ದರ ಹೇರಿಸಿ ಮಾರುತ್ತ ಇರೋದು ಒಂದು ನಾಚಿಕೆಗೇಡಿ ಸಂಗತಿ, ಬೀದರ ಜಿಲ್ಲೆಯ ಮಾನ ಮರ್ಯಾದೆ ಕಳೆಯುತ್ತಾ ಇದ್ದಾರೆ.

ಒಂದು ಕಡೆ ಸಾಮಾಜಿಕ ಕಾರ್ಯಕರ್ತರು ಮತ್ತು ಜನ ಸಾಮಾನ್ಯರು ತೊಂದರೆಯಲ್ಲಿ ಇರುವ ಜನರಿಗೆ ಸಹಾಯ ಹಸ್ತ ಚಾಚಿ, ಊಟ ಮತ್ತು ಧಾನ್ಯಗಳ ವ್ಯವಸ್ಥೆ ಮಾಡುತ್ತಾ ಇದ್ದಾರೆ, ಅದರಲ್ಲಿ ಕೆಲವು ಮನುಷ್ಯತ್ವ ಇಲ್ಲದ ವ್ಯಾಪಾರಿಗಳು ವಾಮ ಮಾರ್ಗದಲ್ಲಿ ಹಣ ಸಂಪಾದಿಸುವುಲ್ಲಿ ತೊಡಗಿದ್ದಾರೆ.

ಜಿಲ್ಲಾಧಿಕಾರಿ ಯವರು ವ್ಯಾಪಾರಿಗಳ ಮೇಲೆ ಸಿಟ್ಟು ಮಾಡಿ ಖಡಕ್ ಆದೇಶ ಹೊರಡಿಸಿದ್ದಾರೆ. ಬೀದರ ಮತ್ತು ಎಲ್ಲಾ ತಾಲೂಕಗಳಲ್ಲಿ ದರಗಳ ಮೇಲೆ ಗಮನಸೆಳೆಯುವ ಒಂದು ಸಮಿತಿ ರಚಿಸಿದ್ದಾರೆ. ದರ ಪಟ್ಟಿ ಹಾಗೂ ದಾಸ್ತಾನು ಅಂಗಡಿ ಹೊರಗೆ ಬೋರ್ಡ್ ಮೇಲೆ ಬರೆದಿಡಲು ಸೂಚಿಸಿದ್ದಾರೆ.

ಇಂದು ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿಗಳು ಹಲವು ಅಂಗಡಿಗಳ ಮೇಲೆ ಛಾಪಾ ಹಾಕಿದ್ದಾರೆ.

ದಯಮಾಡಿ ವ್ಯಾಪಾರಿಗಳು ಈ ಸಮಯದಲ್ಲಿ ತೊಂದರೆಯಲ್ಲಿ ಇರುವ ಜನಕ್ಕೆ ಮೋಸ ಮಾಡಬಾರದು, ನಿಮಗೆ ಒಳೆದು ಆಗಲ್ಲ, ದೇವರಿಗಾದರು ಹೆದರಿ, ದಯಮಾಡಿ ಎಲ್ಲರೂ ಪ್ರಾಮಾಣಿಕವಾಗಿ ವ್ಯಾಪಾರ ಮಾಡಿ.

ಶ್ರೀಕಾಂತ ಸ್ವಾಮಿ ಬೀದರ, ಅಧ್ಯಕ್ಷ, ಜಿಲ್ಲಾ ಸಮಗೃ ಅಭಿವೃದ್ಧಿ ಹೋರಾಟ ಸಮಿತಿ.


ವರದಿಗಾರರು.

ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು
ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments

Popular posts from this blog

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .