ಕೋನಮೇಳಕುಂದಾ. ಧನ್ನೂರದಲ್ಲಿ ನರೇಗಾದಡಿ ಕಾಮಗಾರಿ ವೀಕ್ಷಿಸಿದ ಶಾಸಕರು ಈಶ್ವರ ಖಂಡ್ರೆ.
ಬೀದರ ನ್ಯೂಸ್.. ಭಾಲ್ಕಿ ಸುದ್ದಿ:...... ಕೋನಮೇಳಕುಂದಾ, ಧನ್ನೂರಾದಲ್ಲಿ ನರೇಗಾದಡಿ ಕಾಮಗಾರಿ ವೀಕ್ಷಿಸಿದ ಶಾಸಕ ಖಂಡ್ರೆ ಲಾಕ್ ಡೌನ್ ಸಂಕಷ್ಟದಲ್ಲಿರುವ ದುಡಿವ ಕೈಗಳಿಗೆ ಕನಿಷ್ಟ ೨೦೦ ದಿನ ಕೆಲಸ ನೀಡಲು ಸರಕಾರಕ್ಕೆ ಒತ್ತಾಯ ಭಾಲ್ಕಿ ಲಾಕ್ ಡೌನ್ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರಿಗೆ ನರೇಗಾದಡಿ ಒಂದು ಪರಿವಾರಕ್ಕೆ ಕನಿಷ್ಟ ೨೦೦ ದಿವಸ ಕೆಲಸ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರು, ಶಾಸಕರಾದ ಶ್ರೀ ಈಶ್ವರ ಖಂಡ್ರೆಅವರು ಒತ್ತಾಯಿಸಿದ್ದಾರೆ ತಾಲೂಕಿನ ಕೋನ ಮೇಳಕುಂದಾ ಹಾಗೂ ಧನ್ನೂರು(ಹೆಚ್) ಗ್ರಾಮಗಳ ಹೊರ ವಲಯದಲ್ಲಿ ನರೇಗಾದಡಿ ನಡೆಯುತ್ತಿರುವ ಕಾಮಗಾರಿ ಸೋಮವಾರ ವೀಕ್ಷಿಸಿ ಮಾತನಾಡಿದರು. ಕೋವಿಡ್ ೧೯ ತಡೆಗೆ ಸರಕಾರ ಹೊರಡಿಸುವ ಲಾಕ್ ಡೌನ್ ನಿಂದ ಕಳೆದ ೩೫ ದಿವಸಗಳಿಂದ ಬಡವರು, ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೊತ್ತಿನ ಊಟಕ್ಕೆ ತೊಂದರೆ ಅನುಭವಿಸುಂತಹ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ವೈಯಕ್ತಿಕವಾಗಿ ನಾನು ಹಾಗೂ ನಮ್ಮ ಬೆಂಬಲಿಗರು, ಅಭಿಮಾನಿಗಳು ಸೇರಿ ಅಗತ್ಯ ಇರುವ ಕಡೆಗಳಲ್ಲಿ ಆಹಾರದ ಪೊಟ್ಟಣ, ತರಕಾರಿ ಕಿಟ್, ಮಾಸ್ಕ್ ಸೇರಿ ಪಡಿತರ ಹಾಗೂ ಪಡಿತರ ರಹಿತ ಫಲಾನುಭವಿಗಳಿಗೆ ಎರಡು ತಿಂಗಳ ಮುಂಗಡ ಪಡಿತರ ನೀಡುವುದು ಸೇರಿದಂತೆ ಇತ್ಯಾದಿ ಅಗತ್ಯ ಸೌಲಭ್ಯ ನೀಡಿ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದರು ಲಾಕ್ ಡೌನ್ ನಿಂದ ಕೆಲಸ ಕಳೆದು ಕೊಂಡು ಆರ್ಥಿಕವಾಗಿ ಸಮಸ್ಯ...