"ಓದಿನ ಮನೆ " ಕಾರ್ಯಕ್ರಮ ೯ನೇ ದಿನಕ್ಕೆ ವಿಜಯಕುಮಾರ್ ಸೋನಾರೆ ಅಧ್ಯಕ್ಷರು ಮನೆಯಲ್ಲಿ

ಬೀದರ ನ್ಯೂಸ್...

ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಪ್ರಾರಂಭವಾದ  " ಓದಿನ ಮನೆ "ಕಾರ್ಯಕ್ರಮವು 9ನೇ ದಿನಕ್ಕೆ ಕಾಲಿಟ್ಟಿದೆ.
ಇಂದು ಎ ಆರ್ ಮಣಿಕಾಂತ್ ಅವರು ಬರೆದ
 " ಯೋಧನ ಪತ್ರವನ್ನು ಎದುರಿಗಿಟ್ಟುಕೊಂಡು " ಎಂಬ  ಕಥೆಯನ್ನು ಓದಿದ ಮಕ್ಕಳೆಲ್ಲರೂ ಒಂದು ಕ್ಷಣ ಮೌನವಾಗಿ ಕುಳಿತು ಕೊಂಡರು . ಕಾಶ್ಮೀರದ ಕಣಿವೆಯಲ್ಲಿ ಕೆಲಸ ಮಾಡುವ ಯೋಧನೊಬ್ಬನ ಭಾವನೆಗಳ ಸುತ್ತ ಮುತ್ತ ಹೆಣೆದ ಕಥೆಯಿದು.
ಮನೆಯಲ್ಲಿ ಆರಾಮವಾಗಿ ಎಲ್ಲ ಬಂಧು ಬಳಗದವರೊಂದಿಗೆ ಸೇರಿ ಹಬ್ಬ ಹರಿದಿನಗಳನ್ನು ಆಚರಿಸಿ ಸಂಭ್ರಮಿಸುವ ಹೊತ್ತಿನಲ್ಲಿ ನಮ್ಮ ಯೋಧರು ನಮಗಾಗಿ ಗಡಿ ಕಾಯುತ್ತಾ ಇರುತ್ತಾರಲ್ಲ. ಜೀವನದ ಅತ್ಯಮೂಲ್ಯ ಕ್ಷಣಗಳನ್ನು ನಮಗಾಗಿ ತ್ಯಾಗ ಮಾಡುವ ಅವರಿಗೊಂದು ಸೆಲ್ಯೂಟ್ ಹೇಳಿದೇವು . ಸಿ.ಆರ್.ಪಿ.ಎಫ್ ನಲ್ಲಿ ದೇಶಕ್ಕಾಗಿ ದುಡಿಯುತ್ತಿರುವ ನನ್ನ ತಮ್ಮನಿಗೂ ಕೂಡ ಒಳ್ಳೆಯದಿರಲಿ ಕೆಟ್ಟದಿರಲಿ ಯಾವ ಕಾರ್ಯಕ್ರಮದಲ್ಲಿಯೂ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಅಪ್ಪು ನನ್ನ ತಮ್ಮ ಹಾಗೂ ಅವ್ವಾ  ತೀರಿಕೊಂಡಾಗ ಸಹಿತ ಅವನು ಮೂರನೇ ದಿವಸಕ್ಕೆ ಬಂದಿದ್ದ. ನಾನು ಬಾವುಕಳಾದೆ .ಕಾರಣ ಕಾರ್ಯಕ್ರಮ
 ಮುಗಿಸಿದೇವು .
ಬಾಂಧವರೇ
ಮನೆಯಲ್ಲೇ ಇರಿ .ಕರೋನಾ ಓಡಿಡಿಸುವುದಕ್ಕೆ ಸಹಕರಿಸಿ.


ವರದಿಗಾರರು..

ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು
ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments

Popular posts from this blog

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .