"ಓದಿನ ಮನೆ " ಕಾರ್ಯಕ್ರಮ ಬೀದರ ವಿಜಯಕುಮಾರ್ ಸೋನಾರೆ ಮನೆಯಲ್ಲಿ ಕರೋನಾ ವ್ಯೆರಸ್ ತಡೆಗಟ್ಟಲು ಜಾಗ್ರತಿ ಕಾರ್ಯ .

ಬೀದರ ನ್ಯೂಸ್...

ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ 8ನೇ ದಿವಸದ " ಓದಿನ ಮನೆ " ಕಾರ್ಯಕ್ರಮದಲ್ಲಿ ಇಂದು

"ಕೋಪದ ಕೈಗೆ ಬುದ್ಧಿ ಕೊಡುವ ಎಲ್ಲ ಅಪ್ಪಂದಿರಿಗೆ "
ಎಂಬ ಆರ್ ಮಣಿಕಾಂತ್ ಅವರು ಬರೆದ ಕಥೆಯನ್ನು ಡಾ ಗಂಥಿಕಾ ಸೋನಾರೆ ಓದಿದರು. ಶಿಸ್ತಿನ ಹೆಸರಿನಲ್ಲಿ ಮಗನನ್ನು  ಪ್ರತಿನಿತ್ಯ ಸಣ್ಣ ಪುಟ್ಟ ತಪ್ಪುಗಳಿಗೂ ಕಪಾಳಕ್ಕೆ ಬಾರಿಸಿ , ನನ್ನ ಮಗನನ್ನು ತುಂಬಾ ಸ್ಟ್ರಿಕ್ಟ್ ಆಗಿ ಬೆಳೆಸುತ್ತಿದ್ದೇನೆಂದು ಬೀಗುವ ತಂದೆಗೆ, ಮುಂದೊಂದು ದಿನ ತಾನು ಕಪಾಳಕ್ಕೆ ಬಾರಿಸಿದ್ದರ ಪರಿಣಾಮ ಮಗನಿಗೆ ಶಾಶ್ವತವಾದ ಕಿವುಡುತನ ಬಂತು ಎಂದು ವೈದ್ಯರ ಮೂಲಕ ತಿಳಿದು ಪಶ್ಚಾತ್ತಾಪವಾಗುತ್ತದೆ. ಆದರೆ  ಅಪ್ಪ ಹೊಡೆದದ್ದು ನನ್ನನ್ನು ಚೆನ್ನಾಗಿ ಬೆಳೆಸುವ ಉದ್ದೇಶದಿಂದ ಎಂದು ತಂದೆಯನ್ನು ದೂರದೆ , ಆದದ್ದಾಯಿತು ಚಿಂತೆ ಮಾಡಬೇಡಿ ಎಂದು ತಂದೆಗೆ ಸಮಾಧಾನ  ಹೇಳುತ್ತಾನೆ .ಲೇಖಕರು ತುಂಬಾ ಸರಳ ಮತ್ತು ಸುಂದರವಾದ ನಿರೂಪಣೆಯೊಂದಿಗೆ ಕಥೆಯನ್ನು ಕಟ್ಟಿ ಕೊಟ್ಟಿದ್ದಾರೆ..
ಎರಡನೇ ಕಥೆ ರವೀಂದ್ರನಾಥ್ ಟ್ಯಾಗೋರ್ ಅವರು ಬರೆದ" ಬಿಕಾರಿ "  ನಿಸ್ವಾರ್ಥ ಬಿಕ್ಷುಕಿಯೊಬ್ಬಳ ಕಥೆ . ಇದನ್ನು ಖುಷಿ ಹಿಂದಿಯಲ್ಲಿ ಓದಿದರೆ ಅದನ್ನು ಕನ್ನಡಕ್ಕೆ ಅನುವಾದಿಸಿ ವಿವರಿಸಿದ್ದು ಸಾಯಿಕಿರಣ .
ಕೊನೆಗೆ ಸಾಹಿತ್ಯ ಳ ವಚನ ಗಾಯನದೊಂದಿಗೆ ಕಾರ್ಯಕ್ರಮ ಮುಗಿಸಲಾಯಿತು.
ಸ್ನೇಹಿತರೇ  ಮನೆಯಲ್ಲೇ ಇರಿ . ಸಾಧ್ಯವಾದಷ್ಟು ನಿಮಗೆ ಖುಷಿ ಕೊಡುವ ಯಾವುದಾದರೂ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ.ಕರೋನಾ ಓಡಿಸಲು ನೀವೂ ಕೈ ಜೋಡಿಸಿ.


ವರದಿಗಾರರು..

ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು
ರಾಹುಲಕ್ರಾಂತಿಕಾರಿ ಬೀದರ ಜಿಲ್ಲೆಯ.

Comments

Popular posts from this blog

ಬ್ಯಾಂಕ್ ಆಫ್ ಭಾರತೀಯ ಲಾಕ್ ಡೌನ್ ನಿಯಮ ಬಾಯಿರ್.ಬಸವಕಲ್ಯಾಣ ಬ್ಯಾಂಕ್.

ಉದ್ಯೋಗ ಖಾತ್ರಿ ಯೋಜನೆಯ ಜಾರಿಗೆ ಈಶ್ವರ ಖಂಡ್ರೆ ಭರವಸೆ ಭಾಲ್ಕಿ ಜನತೆಗೆ ಬಡತನ ನಿವಾರಣೆ ಸಲುವಾಗಿ

ಅಂಬೆಸಾಂಗವಿ.ಕೋಸಂ ಕೆರೆಗೆ ಶಾಸಕರು ಈಶ್ವರ ಖಂಡ್ರೆ ಭೇಟಿ .